ಪ್ರಧಾನಿ ಮೋದಿ ಜೊತೆ ಸಭೆ: ದೀದಿಗೆ ಮತ್ತೆ ಅವಮಾನ

ಪ್ರಧಾನಿ ಮೋದಿ ಜೊತೆ ಸಭೆ: ದೀದಿಗೆ ಮತ್ತೆ ಅವಮಾನ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಡಿಸೆಂಬರ್‌ 22ರಂದು ವರ್ಚುವಲ್ ಸಭೆ ಏರ್ಪಡಿಸಿದ್ದರು.

      ಆದರೆ, ಈ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅವಮಾನ ಆಗಿದೆ ಎಂದು ಆ ರಾಜ್ಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

      ಮಮತಾ ಅವರು ಸಭೆಯಲ್ಲಿ ಎರಡು ಗಂಟೆ ಭಾಗಿಯಾದರೂ ಅವರಿಗೆ ಪ್ರಧಾನಿಯವರು ಮಾತನಾಡಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

      ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅವರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌ ಈ ಹಿಂದೆ ಕೂಡ ಬ್ಯಾನರ್ಜಿ ಅವರು ಇಂತಹುದೇ ಪ್ರಸಂಗ ಎದುರಿಸಿದ್ದರು.

ಇದನ್ನೂ ಓದಿ:

https://bit.ly/3yPTEtd ಭಾರತದಲ್ಲಿ ಕೋವಿಡ್‌ ಮೂರನೇ ಅಲೆ: ಫೆಬ್ರವರಿಯಲ್ಲಿ ಉತ್ತುಂಗಕ್ಕೆ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ