ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮೂಲಕ ಆರ್ಥಿಕ ನೆರವು

ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮೂಲಕ ಆರ್ಥಿಕ ನೆರವು

ಬಂಟ್ವಾಳ: ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯಾ ಇದರ ಸಮನ್ವಯ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಾರ್ಗದರ್ಶನ ಶಿಬಿರವು ಗೂಡಿನಬಳಿಯ ಜಿ. ಎಂ. ರೆಸಿಡೆನ್ಸಿಯಲ್ಲಿ ಶನಿವಾರದಂದು ನಡೆಯಿತು.

      ಸಂಸ್ಥೆಯ ಚೇಯರ್ಮೆನ್ ಜಿ.ಕೆ.ಮುಹಮ್ಮದ್ ಸಲೀಂ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮಾಸ್ಟರ್ ಅಲೀ ರಿಜ್ವಾನ್ ಜಿ.ಕೆ ಕಿರಾಅತ್ ಪಠಿಸಿದರು. ಮಸ್ಜಿದ್-ಎ-ಮುತ್ತಲಿಬ್ ಗೂಡಿನಬಳಿ ಇದರ  ಖತೀಬರಾದ ಅಶ್ರಫ್ ಫೈಝಿ ದುವಾ ಆರ್ಶಿವಾಚನಗೈದರು. ಸಮನ್ವಯ ಸಮಿತಿಯ ಅಧ್ಯಕ್ಷರಾದ ಜಿ.ಎಂ ಅನ್ವರ್ ಹುಸೈನ್ ಸ್ವಾಗತ ಭಾಷಣ ಮಾಡಿದರು.

      ಸ್ಥಳೀಯ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರು ಕಾರ್ಯಕ್ರಮವನ್ನು ಉದ್ಫಾಟಿಸಿದರು.

      ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಫೀಕ್ ಮಾಸ್ಟರ್ ರವರು ಮಾತನಾಡಿ “ಮಕ್ಕಳು ಬಾಲ್ಯದಲ್ಲಿ ತಲೆ ತಗ್ಗಿಸಿಕೊಂಡು ಪುಸ್ತಕವನ್ನು ಓದಿದರೆ, ಮುಂದಕ್ಕೆ ಅವರನ್ನು ತಲೆ ಎತ್ತುವಂತೆ ಮಾಡುತ್ತದೆ. ಬಾಲ್ಯದಲ್ಲಿ ತಲೆ ತಗ್ಗಿಸಿಕೊಂಡು ಮೊಬೈಲ್ ನೋಡಿದರೆ ಮುಂದೆ ತಲೆ ಎತ್ತದಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು”.

      ಸುಮಾರು 40 ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸ್ಮರಣ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು. ಮತ್ತು ಸ್ಥಳೀಯ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

      ಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಉಪಾಧ್ಯಕ್ಷರಾದ ಜಿ.ಕೆ ರಿಝ್ವಾನ್, ಕಾರ್ಯದರ್ಶಿ ಜಿ.ಕೆ ಜೌಹಾರ್, ಕೋಶಾಧಿಕಾರಿ ಜಿ.ಎಂ. ಅಮೀರ್ ಹುಸೈನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

      ಸಮನ್ವಯ ಸಮಿತಿಯ ಕಾರ್ಯದರ್ಶಿಯರಾದ ಜಿ.ಕೆ ಅಬ್ದುಲ್ ರಶೀದ್ ಕೋಟಿಹಿತ್ತಿಲು ಹಾಗೂ ಜಿ.ಕೆ. ಅತಾವುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ