ಕಲ್ಲಡ್ಕದ ಹೆಮ್ಮೆಯ ಸಾಧಕರಿಗೆ ದುಬೈಯಲ್ಲಿ ಸನ್ಮಾನ

ದುಬೈ: ಹುಟ್ಟೂರ ಸಾಧಕರಾದ ಕಲ್ಲಡ್ಕ ಯಾಸಿರ್ ಹಾಗೂ ಮಿಕ್ದಾದ್ ಗೋಳ್ತಮಜಲು ಇವರುಗಳಿಗೆ ದುಬೈಯ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ವತಿಯಿಂದ ದುಬೈ ದೇರಾ ಗಾರ್ಡನ್ ಸಿಟಿ ತ್ರೀ ಸ್ಟಾರ್ ಹೋಟೆಲ್ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.
ಯಾಸಿರ್ ಅವರು ಪುರಾತನ ಕಾಲದ ಮತ್ತು ನೂತನ ಕಾಲದ ಎಲ್ಲಾ ತರಹದ ವಸ್ತುಗಳನ್ನು ಮತ್ತು ಹಲವಾರು ದಾಖಲೆಗಳನ್ನು ಇಟ್ಟು ಕಲ್ಲಡ್ಕದಲ್ಲಿ ಮ್ಯೂಸಿಯಂ ತಯಾರಿಸಿ 'ಮ್ಯೂಸಿಯಂ ಯಾಸಿರ್' ಎಂದೇ ಖ್ಯಾತಿ ಪಡೆದು, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದವರು. ಕಲ್ಲಡ್ಕದ ಹೆಮ್ಮೆಯ ಸಾಧಕರಾದ ಇವರ ಮ್ಯೂಸಿಯಂ ವೀಕ್ಷಣೆಗೆ ದೇಶ ವಿದೇಶಗಳಿಂದ ಜನರು ಬರುತ್ತಿದ್ದಾರೆ. ಯಾಸಿರ್ರವರನ್ನು ದುಬೈಯ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಸಂಸ್ಥೆಯು ಹುಟ್ಟೂರಿನ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಿತು.
ಅದೇ ರೀತಿ ಚಿತ್ರ ಕಲೆಗಾಗಿ ರಾಜ್ಯ ಮಟ್ಟದ ಚಿನ್ನದ ಪದಕ ವಿಜೇತ, ವಿಭಿನ್ನ ಚಿತ್ರ ಕಲಾ ಸಾಧಕ ಮಿಕ್ದಾದ್ ಗೋಳ್ತಮಜಲ್ರವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇವರ ಚಿತ್ರ ಕಲಾ ಸಾಧನೆಗೆ ಸಾಕಷ್ಟು ಕಡೆ ಹೊಗಳಿಕೆ, ಪ್ರಶಸ್ತಿ, ಮೆಚ್ಚುಗೆ ಸಿಕ್ಕಿದೆ. ಇವರ ಅನೇಕ ಚಿತ್ರಗಳು ಸಾಧನೆಯ ಮಡಿಲಲ್ಲಿ ಕಂಗೊಳಿಸುವಂತಿದೆ
ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕರ್ನಾಟಕದ ಹೆಮ್ಮೆಯ ಸಾಧಕ.
ವೇದಿಕೆಯಲ್ಲಿ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಅಧ್ಯಕ್ಷರಾದ ನವಾಝ್ ಹಜಾಜ್ ಗೋಳ್ತಮಜಲ್, ಉಪಾಧ್ಯಕ್ಷರಾದ ರಫೀಕ್ ಸಾಹೇಬ್ ಹಾಗೂ ಸನ್ಮಾನಿತರಾದ ಯಾಸಿರ್ ಹಾಜಿ ಕಲ್ಲಡ್ಕ ಹಾಗು ಮಿಕ್ದಾದ್ ಗೋಳ್ತಮಜಲ್ ಮತ್ತು ಹಿರಿಯರಾದ ಹಸನ್ ಬಾವಾಕ ಉಪಸ್ಥಿತರಿದ್ದರು
ಈ ಕಾರ್ಯಕ್ರಮವನ್ನು ಕೆ.ಕೆ. ಜಬ್ಬಾರ್ ಕಲ್ಲಡ್ಕ ನಿರೂಪಿಸಿದರು. ನಾಸಿರ್ ಕಲ್ಲಡ್ಕ ವಂದಿಸಿದರು.
-ವರದಿ : ಕೆ ಕೆ ಜಬ್ಬಾರ್ ಕಲ್ಲಡ್ಕ
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ