ಕುಲಪತಿ ಹುದ್ದೆ ನೆಪದಲ್ಲಿ ವಂಚನೆ: ತನಿಖೆಗೆ ಎಸ್ಡಿಪಿಐ ಆಗ್ರಹ

ಮಂಗಳೂರು, ಮಾ31: ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.50ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಷಡ್ಯಂತರವನ್ನು ಬಯಲಿಗೆಳೆಯಬೇಕೆಂದು ಎಸ್ಡಿಪಿಐ ಆಗ್ರಹಿಸಿದೆ.
ಕುಲಪತಿ ಹುದ್ದೆಯ ಹೆಸರಲ್ಲಿ 17.50 ಲಕ್ಷ ರೂಪಾಯಿಗಳನ್ನು ವಂಚಿಸಿದ ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ನಾಯಕ ಮತ್ತು ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ನನ್ನು ಬಂಧನಗೊಳಿಸಿರುವ ಪೊಲೀಸರ ಕಾರ್ಯವನ್ನು ಶ್ಲಾಘನೀಯ ಎಂದು ಎಸ್ಡಿಪಿಐ ಹೇಳಿದೆ.
ಪ್ರಸ್ತುತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಾ ಇದೆ. ಆದರೆ ಎಲ್ಲಾ ಕಡೆಯು ಭ್ರಷ್ಟಾಚಾರ, ಲಾಬಿ, ವಂಚನೆಯೂ ನಡೆಯುತ್ತಿದೆ, ದ.ಕ ಜಿಲ್ಲೆಯಲ್ಲಿ ಕೂಡ ಸರ್ಕಾರಿ ಅಧಿಕಾರಿಗಳನ್ನು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡುವುದು, ಉನ್ನತ ಹುದ್ದೆಗೆ ಪ್ರೊಮೋಷನ್ ಕೊಡಿಸುವಂತಹ ದೊಡ್ಡ ಲಾಬಿಯೇ ಇದೆ ಎಂದು ಕುಲಪತಿ ಹುದ್ದೆಯ ಹೆಸರಲ್ಲಿ ನಡೆದಿರುವ ವಂಚನೆಯು ಸಾಬೀತು ಪಡಿಸುತ್ತಿದೆ.
ಈ ಪ್ರಕರಣದಲ್ಲಿ ಯಾರೆಲ್ಲ ಬಾಗಿಯಾಗಿದ್ದಾರೆ, ಇದರಲ್ಲಿ ಸಂಸದರ, ಶಾಸಕರ ಮತ್ತು ಹಿಂದುತ್ವ ನಾಯಕರ ಪಾಲೆಷ್ಟು ಎಂಬುದನ್ನು ತನಿಖೆಗೆ ಒಳಪಡಿಸಿ ವಂಚನೆ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯ ಬೇಕು ಹಾಗೆಯೇ ಅವರ ಮೇಲೆ ವಂಚನೆಯ ದೂರು ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಎಸ್ಡಿಪಿಐ ಆಗ್ರಹಿಸುತ್ತದೆ ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ