ಅದಾನಿಗೆ ಸಹಾಯ ಮಾಡಲು ಮೋದಿಯನ್ನು ದೇವರು ಕಳುಹಿಸಿದ್ದಾರೆ: ರಾಹುಲ್ ಲೇವಡಿ

ಅದಾನಿಗೆ ಸಹಾಯ ಮಾಡಲು ಮೋದಿಯನ್ನು ದೇವರು ಕಳುಹಿಸಿದ್ದಾರೆ: ರಾಹುಲ್ ಲೇವಡಿ

ನವದೆಹಲಿ: ದೇಶದ ಜನರ ಸೇವೆ ಮಾಡಲು 'ದೇವರು ನನ್ನನ್ನು ಕಳುಹಿಸಿದ್ದಾರೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

      'ಬಡವರ ನೆರವಿಗಾಗಿ ಅಲ್ಲ. ಅದಾನಿ ಅವರಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಕಳುಹಿಸಿದ್ದಾರೆ' ಎಂದು ಟೀಕಿಸಿದ್ದಾರೆ.

      'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇ 50ರಷ್ಟು ಮಿತಿಯನ್ನು ತೆಗೆದು ಹಾಕುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

      ಉತ್ತರ ಪ್ರದೇಶದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, 'ಇಂಡಿಯಾ ಮೈತ್ರಿಕೂಟ ಹಾಗೂ ಸಂವಿಧಾನ ಒಂದು ಕಡೆಯಾದರೆ, ಸಂವಿಧಾನವನ್ನು ನಾಶಪಡಿಸಲು ಬಯಸುವವರ ಬಣ ಇನ್ನೊಂದು ಕಡೆಯಾಗಿದೆ' ಎಂದು ಹೇಳಿದ್ದಾರೆ.

      'ದಿಲ್, ಜಾನ್ ಔರ್ ಖೂನ್' (ಹೃದಯ, ಪ್ರಾಣ ಹಾಗೂ ರಕ್ತ)ವನ್ನು ನೀಡಿಯಾದರೂ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ' ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

      'ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 'ಅಗ್ನಿಪಥ' ಯೋಜನೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯಲಿದ್ದೇವೆ' ಎಂದು ಸಹ ರಾಹುಲ್ ಪುನರುಚ್ಚರಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ